Command Palette

Search for a command to run...

ಇಂದು ಎನಗೆ ಗೋವಿಂದ
ರಾಘವೇಂದ್ರ ತೀರ್ಥರು
ಇಂದು ಎನಗೆ ಗೋವಿಂದ ನಿನ್ನ ಪಾದಾರವಿಂದವ ತೋರೋ ಮುಕುಂದನೇ । ಸುಂದರ ವದನನೇ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ ॥ ನೊಂದೆನಯ್ಯ ನಾ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು । ಕಂದನಂತೆ ಎನ್ನ ಕುಂದುಗಳೆಣಿಸದೆ ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೇ ॥1॥ ಮೂಢತನದಿ ಬಲು ಹೇಡಿ ಜೀವನನಾಗಿ ದೃಢಭಕ್ತಿಯನು ಮಾಡಲಿಲ್ಲವೋ ಹರಿಯೇ । ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ನಿನ್ನ ॥2॥ ಧಾರುಣಿಯೊಳು ಬಹು ಭಾರ ಜೀವನನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ । ಆರು ಕಾಯುವರಿಲ್ಲ ಸಾರಿದೆ ನಿನಗಯ್ಯ ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ ॥3॥ ॥ ಇಂದು ಎನಗೆ ಗೋವಿಂದ ಸಂಪೂರ್ಣ ॥